Monday, October 12, 2015

ಗುರು ಪ್ರಸಾದ at my desk. Please help to read yourself



ಒಂದು ಚೇಳು ನೀರಿನಲ್ಲಿ ಬಿದ್ದು, ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಆ ದಾರಿಯಲ್ಲಿ ಒಬ್ಬ ಸಂತ ಶಿಷ್ಯರೊಡನೆ ಹೋಗುತ್ತಿದ್ದ. ಆತ ಈ ಚೇಳನ್ನು ಗಮನಿಸಿದ. ಅವನ ಮನ ಕರಗಿತು. ಅದನ್ನು ಬದುಕಿಸಬೇಕು ಎಂದು ತೀರ್ಮಾನಿಸಿದ ಮತ್ತು ತನ್ನ ಕೈಯಿಂದ ಆ ಚೇಳನ್ನು ನೀರಿನಿಂದ ಎತ್ತಿದ. ಎತ್ತಿದ ತಕ್ಷಣ ಚೇಳು ಆ ಸಂತನ ಕೈಗೆ ಕುಟುಕಿತು. ಸಂತ ತನ್ನ ಕೈಯನ್ನ ಕುಡುಗಿದ. ಕೈಯಲ್ಲಿದ್ದ ಚೇಳು ಜಾರಿ ಮತ್ತೆ ನೀರಿಗೆ ಬಿತ್ತು. ಪುನ: ಸಾವು - ಬದುಕಿನ ಹೋರಾಟ. ಸಂತನಿಗೆ ಮತ್ತೆ ಅಯ್ಯೋ ಎನಿಸಿತು. ಮತ್ತೆ ತನ್ನ ಕೈಯಿಂದ ಚೇಳನ್ನು ರಕ್ಷಿಸಲು ಪ್ರಯತ್ನಿಸಿದ. ಚೇಳನ್ನು ಎತ್ತುತ್ತಿದ್ದಂತೆಯೆ ಅದು ಮತ್ತೆ ಸಂತನ ಕೈಗೆ ಕಚ್ಚಿತು. ಉರಿ ತಾಳಲಾರದೆ ಸಂತ ಮತ್ತೆ ತನ್ನ ಕೈ ಕುಡುಗಿದ. ಆ ರಭಸಕ್ಕೆ ಮತ್ತೆ ಚೇಳು ನೀರೊಳಗೆ ಬಿತ್ತು. ಈ ಘಟನೆಗಳು ಪುನ: ಪುನ: ನಡೆದವು. ಹಲವಾರು ಬಾರಿಯ ಪ್ರಯತ್ನದ ನಂತರ ಆ ಸಂತ ನೀರಿನಲ್ಲಿ ಬಿದ್ದ ಚೇಳನ್ನು ತನ್ನ ಕೈಯಾರೆ ಎತ್ತಿ ದಡಕ್ಕೆ ಬಿಡಲು ಯಶಸ್ವಿಯಾದ. ಆದರೆ ಆ ವೇಳೆಗಾಗಲೇ ಸಂತನಿಗೆ ಚೇಳಿನ ನಂಜು ಹೆಚ್ಚಿತ್ತು. ತಾಳಲಾರದೆ ಕುಸಿದು ಕುಳಿತ. ಆತನ ಶಿಷ್ಯರು ಈ ಘಟನೆಗಳನ್ನು ವಿಚಿತ್ರವೆಂಬಂತೆ ನೋಡುತ್ತಿದ್ದರು. ಸಂತನನ್ನು ಉಪಚರಿಸಿದರು. ಆತ ಪುನ: ಮೇಲೆದ್ದ. ಮೇಲೆದ್ದ ಸಂತನಿಗೆ ಶಿಷ್ಯರು ಕೇಳಿದರು. "ಏನಿದು ಗುರುಗಳೇ? ಹೇಳಿ ಕೇಳಿ ಅದು ಚೇಳು. ಕಚ್ಚುತ್ತದೆ. ಅದನ್ನು ನೀವು ರಕ್ಷಿಸಲು ಹೊರಟಿದ್ದು ಸರಿಯೆ? ಅದನ್ನು ಆ ನೀರಿನಲ್ಲಿಯೇ ಸಾಯಲು ಬಿಡಬಾರದಿತ್ತೇ?" ಪ್ರಶ್ನೆಗೆ ಆ ಸಂತ ಮಾರ್ಮಿಕವಾಗಿ ಉತ್ತರಿಸಿದ - "ಹೌದು. ಅದು ಚೇಳು. ಕಚ್ಚುವುದು ಅದರ ಸ್ವಭಾವ. ನಾನು ಕೈಯಿಂದ ಕೆಳಗೆ ಬಿಟ್ಟರೆ ನೀರಿನಲ್ಲಿ ಬಿದ್ದು ತಾನು ಸಾಯುತ್ತೇನೆಂದು ಅದಕ್ಕೆ ಗೊತ್ತು. ಆದರೂ ಅದು ಕಚ್ಚುವ ತನ್ನ ಸ್ವಭಾವವನ್ನು ಬಿಡಲಿಲ್ಲ. ಸಾಯುವ ಸ್ಥಿತಿಯಲ್ಲಿದ್ದರೂ ತನ್ನ ಸ್ವಭಾವವನ್ನು ಬಿಡಲಿಲ್ಲ. ಇನ್ನು ನಾನು. ನನಗೆ ಅದು ಕಚ್ಚಿದರೆ ಆಗುವುದು ನೋವಷ್ಟೆ. ಸಾವಲ್ಲ. ಸಣ್ಣ ನೋವಿಗೆ ಹೆದರಿ ನಾನು ರಕ್ಷಿಸುವ ನನ್ನ ಸ್ವಭಾವವನ್ನು ಬಿಡಲೇ?"

ದೊಡ್ಡವರ ನಡೆಗಳು ದೊಡ್ಡದಾಗೇ ಇರುತ್ತವೆ.

No comments:

Post a Comment